ಯಕ್ಷಗಾನ ಕಲಾರಂಗದಿಂದ ಸೋದೆ ಶ್ರೀಗೆ ಗೌರವಾರ್ಪಣೆ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಶುಕ್ರವಾರ, ಜನವರಿ 31 , 2014
|
ಜನವರಿ 31, 2014
|
ಯಕ್ಷಗಾನ ಕಲಾರಂಗದಿಂದ ಸೋದೆ ಶ್ರೀಗೆ ಗೌರವಾರ್ಪಣೆ
ಉಡುಪಿ :
ತಮ್ಮ ಪರ್ಯಾಯಾವಧಿಯಲ್ಲಿ ಕಲೆ, ಸಾಸಂಸ್ಕೃತಿಕ ಕಾರ್ಯಕ್ರಮಗಳಿಗೆ ವಿಶೇಷ ಪ್ರಾಧಾನ್ಯತೆ ನೀಡಿದ್ದ ಸೋದೆ ವಾದಿರಾಜ ಮಠಾಧೀಶ ಶ್ರೀ ವಿಶ್ವವಲ್ಲಭತೀರ್ಥ ಸ್ವಾಮೀಜಿ ಅವರಿಗೆ ಉಡುಪಿಯ ಯಕ್ಷಗಾನ ಕಲಾರಂಗದ ವತಿಯಿಂದ ಕೃತಜ್ಞತೆ ಸಮರ್ಪಣೆ ಕಾರ್ಯಕ್ರಮ ಕಲಾರಂಗದ ಕಚೇರಿಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು, ಯಕ್ಷಗಾನ ಕಲಾರಂಗ ಕಲೆ-ಕಲಾವಿದರಿಗಾಗಿ ಹುಟ್ಟಿಕೊಂಡ ಸಂಸ್ಥೆ ಯಾಗಿದ್ದರೂ ಶಿಕ್ಷಣ ಹಾಗೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಇತರ ಸಂಸ್ಥೆಗಳಿಗೆ ಮಾದರಿಯಾಗಿದೆ. ತಮ್ಮ ಪರ್ಯಾಯದ ಸಾಂಸ್ಕೃತಿಕ ಕಾರ್ಯಕ್ರಮದ ಯಶಸ್ಸಿಗೆ ಕಲಾರಂಗದ ಕಾರ್ಯಕರ್ತರ ಕೊಡುಗೆ ಅಪಾರ ಎಂದರು.
ಸಂಸ್ಥೆಯ ಸಾಮಾಜಿಕ ಚಟುವಟಿಕೆಗಳಿಗೆ 1,01,008 ರೂ.ಮೊತ್ತದ ನಿಧಿಯನ್ನು ಹಸ್ತಾಂತರಿಸಿದರು. ಸಂಸ್ಥೆಯ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ , ಉಪಾಧ್ಯಕ್ಷರಾದ ಎಸ್.ವಿ. ಭಟ್, ಕೆ. ಗಣೇಶ್ ರಾವ್, ಗಂಗಾಧರ. ಎಂ. ರಾವ್, ಕೋಶಾಧಿಕಾರಿ ಬಿ. ನಾರಾಯಣ, ಪಾಡಿಗಾರು ಶೀನಿವಾಸ ತಂತ್ರಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿ ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯಕ್ರಮದ ಪೂರ್ವದಲ್ಲಿ ಕಲಾವಿದ ಪೃಥ್ವಿರಾಜ್ ಕವತ್ತಾರ್ ಸಂಯೋಜಿಸಿದ 'ಲಯ ವಿನ್ಯಾಸ' ಎಂಬ ವಿಶಿಷ್ಟ ಕಾರ್ಯಕ್ರಮ ನಡೆಯಿತು. ತೆಂಕು ಹಾಗೂ ಬಡಗಿನ ಹಿಮ್ಮೇಳನದ ಕಲಾವಿದರು ಇದರಲ್ಲಿ ಭಾಗವಹಿಸಿದ್ದರು.
ಕೃಪೆ :
http://www.vijaykarnataka.com
|
|
|